ವಿವೇಕಾನಂದ ವಸತಿನಿಲಯ ದೀಪಾಲಂಕೃತವಾದ – ತುಳಸಿ ಪೂಜೆ

ಭಾರತೀಯ ಸಂಸ್ಕೃತಿಯು ಇಲ್ಲದಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಸಂಸ್ಕೃತಿಯ ಮುಖ್ಯ ಅಂಶವನ್ನು ಮುಂದಿಟ್ಟುಕೊಂಡು ವಿವೇಕಾನಂದ ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ದೀಪಾಲಂಕೃತವಾದ ತುಳಸಿ ಪೂಜೆಯನ್ನು ಅತ್ಯುನ್ನತ ರೀತಿಯಲ್ಲಿ ನಡೆಸಲಾಯಿತು.ತುಳಸಿ ಪೂಜೆಯ ಅಂಗವಾಗಿ ಮುಂಜಾನೆ  ವಸತಿ ನಿಲಯಗಳಲ್ಲಿ ಗಣಪತಿ ಹವನವು ನಡೆಯಿತು.ಈ ಕಾರ್ಯಕ್ರಮದಲ್ಲಿ ನಮ್ಮ ವಸತಿ ನಿಲಯದ ಅಧ್ಯಕ್ಷರಾದ ರಮೇಶ್ ಪ್ರಭು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಅಚ್ಚುತ್ ನಾಯಕ್ ಇವರು ಉಪಸ್ಥಿತರಿದ್ದರು.

ಒಗ್ಗಟ್ಟಿನ ಮಹತ್ವವನ್ನು ವ್ಯಕ್ತಪಡಿಸಿಕೊಂಡು ವಸತಿ ನಿಲಯದ ಮಕ್ಕಳು ಒಟ್ಟು ಸೇರಿ ಮಾವಿನ ಎಲೆಗಳ ತೋರಣಗಳಿಂದ ವಸತಿ ನಿಲಯವನ್ನು ಅಲಂಕರಿಸಿದರು.ಅದೇ ರೀತಿಯಲ್ಲಿ ತುಳಸಿ ಕಟ್ಟೆಯ ಎದುರು ರಂಗೋಲಿಯನ್ನು ಹಾಕಿ, ಕತ್ತಲನ್ನು ದೂರ ಪಡಿಸುವ ಬೆಳಕಿನ ಸಂಕೇತವಾಗಿ ಹಣತೆಯನ್ನು ಬೆಳಗಿಸಿದರು.

ನಂತರ ಸಂಜೆ 7 ಗಂಟೆಗೆ ಭಜನೆ ಹಾಗೂ ಕುಣಿತ ಭಜನೆಗಳಿಂದ ಕಾರ್ಯಕ್ರಮ ಮುಂದುವರೆಯಿತು. ನಂತರ ತುಳಸಿ ಕಟ್ಟೆಗೆ ಪೂಜೆ ಮಾಡಿ ಪ್ರಸಾದ ವಿತರಿಸಲಾಯಿತು.ರಾತ್ರಿ 8 ಗಂಟೆಯ ನಂತರ ಸಿಡಿಮದ್ದು ಪ್ರದರ್ಶನ ನಡೆಯಿತು. ನಂತರ ಸಿಹಿ ಊಟದೊಂದಿಗೆ ಈ ತುಳಸಿ ಹಬ್ಬವನ್ನು ಸಂಭ್ರಮಿಸುತ್ತ ಕೊನೆಗೊಳಿಸಿದೆವು.

         

ಈ ವಿಶೇಷ ಕಾರ್ಯಕ್ರಮದಿಂದಾಗಿ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರಿತುಕೊಂಡರು.ಸಂಸ್ಕೃತಿಯು ಯಾವತ್ತು ಮರೆಯಾಗದ ಹಾಗೆ ಎಂದಿಗೂ ನೆಲೆ ನಿಲ್ಲಬೇಕು ಎಂಬುದು ನಮ್ಮೆಲ್ಲರ ಗುರಿಯಾಗಿರುತ್ತದೆ.

Facilities

    • Clean, Friendly, Safe and Secure Atmosphere.
    • Separate Hostels for Men and Women.
    • Common Hall with Television, Newspapers and Magazines.
    • Fully Equipped Kitchen, Dining Room, Common Room.
    • Hot/Cold Running Water.
    • Hot and Aqua guard Purified Drinking Water.
    • Phone Facilities.
    • Mobile Charging Facility.
    • Banking with ATM Facility.
    • Ideal Environment for Study.
    • Smoke Free Environment.

PROHIBITED

    • Alcohol, Drugs, Narcotics, Firearm or Gambling in the Hostel Premises.
    • Animals and Pets.
    • Political and Any Commercial Activity.
    • Offensive behavior which may lead to Expulsion from the Hostel.
    • Absence during night without permission of the Warden.